ತುಂತುರ ಕವನ-೫
ನಾನು ಸಂಸಾರದಲ್ಲಿ ಬಂಧಿ!!
ಗಂಗೆಯನು ಧರೆಗೆ ತಂದು
ಹಿಡಿದ ಹಠ ಸಾಧಿಸಿದನಂತೆ ಭಗೀರಥ
ನಾನಾಗಲಾರೆ ಅವನಂತೆ
ನಾ ಸಾಧಿಸಲಾರೆ ಹಠಕ್ಕೆ ಬಿದ್ದು..
ರಾತ್ರೋರಾತ್ರಿ ಎಲ್ಲವನ್ನೂ ಎಲ್ಲರನ್ನೂ
ತೊರೆದು ಹೋದನಂತೆ ಬುದ್ಧ
ನಾನಾಗಲಾರೆ ಅವನಂತೆ
ನಾ ಹೋಗಲಾರೆ ಎಲ್ಲವನು ತೊರೆದು..
ಏಕೆಂದರೆ...
ನನ್ನ ಕನಸುಗಳಿಗುಂಟು ಮಿತಿ
ನನ್ನ ಆಸೆಗಳಿಗೆ ಬೇಕು ಸಮ್ಮತಿ!
ಎಲ್ಲದಕೂ ಕಡಿವಾಣ ಹಾಕಿ
ನಾ ಸಾಧಿಸಲಾರೆ ಯಾವುದೇ ಉನ್ನತಿ..
ಅನ್ನಿಸಿದ್ದನ್ನು ಹೇಳಲಾರೆ..
ಅಂದುಕೊಂಡಿದ್ದನ್ನು ಮಾಡಲಾರೆ
ನಾ ದಾಟಲಾರೆ ನನ್ನ ಸುತ್ತಲಿನ ಪರಿಧಿ
ಏಕೆಂದರೆ ನಾನು ಸಂಸಾರದಲ್ಲಿ ಬಂಧಿ!!
-ಪೂವಿಕೃ
Comments
Post a Comment